ಕಮಲ ಹಾಸನ್ ಭಾಷಾ ತಜ್ಞರಲ್ಲ : ಪ್ರೊ.ಶಿವರಾಜ ಪಾಟೀಲ

ಕಮಲ ಹಾಸನ್ ಭಾಷಾ ತಜ್ಞರಲ್ಲ
ಕಮಲ ಹಾಸನ್ ಒಬ್ಬ ಶ್ರೇಷ್ಠ ನಟ ಪ್ರತಿಭಾವಂತ ಕಲಾವಿದ ರಾಷ್ಟ್ರದ ಒಂದು ಹೆಮ್ಮೆ ಆದರೆ ಅವರು ಭಾಷಾ ತಜ್ಞರಲ್ಲ ಅವರಿಗೆ ಕನಿಷ್ಠ ಭಾಷೆಗಳ ಇತಿಹಾಸವು ಗೊತ್ತಿಲ್ಲ ಮತ್ತು ಅಧ್ಯಯನವೂ ಮಾಡಿಲ್ಲ ಭಾಷಾ ಜ್ಞಾನವು ಇಲ್ಲ ಯಾವ ಭಾಷೆ ಹೇಗೆ ಹುಟ್ಟಿತು ಎಲ್ಲಿ ಹುಟ್ಟಿತು ಎಂಬುದು ಭಾಷಾ ತಜ್ಞರಿಗೆ ಗೊತ್ತಿಲ್ಲದಾಗ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಅನುಭವವಿಲ್ಲದೆ ಅಧ್ಯಯನವಿಲ್ಲದೆ ಪಾಂಡಿತ್ಯ ವಿದ್ವತ್ತು ಗಳಿಲ್ಲದೆ ಮಾತನಾಡುವುದು ಸರಿಯಲ್ಲ ಅದು ಕಮಲ್ ಹಾಸನ್ ಅಂತ ವ್ಯಕ್ತಿಗೆ ಶೋಭಿಸುವುದಿಲ್ಲ ಮತ್ತು ಅವರ ಗೌರವಕ್ಕೆ ತಕ್ಕು ದಾದ ಮಾತುಗಳಲ್ಲ ವಿಷಯವೂ ಅಲ್ಲ ತಿಳಿದಿದ್ದಕ್ಕಿಂತಲೂ ಕಡಿಮೆ ಮಾತನಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಧಿಕ ಮಾತನಾಡುವುದು ತಿಳುವಳಿಕೆ ಇಲ್ಲದೆ ಹೇಳಿಕೆಗಳನ್ನು ನೀಡುವುದು ಮೂರ್ಖತನ ಭಾರತದಲ್ಲಿರುವ ಸಂವಿಧಾನ ಒಪ್ಪಿಕೊಂಡಿರುವ 16 ಭಾಷೆಗಳು ಸ್ವತಂತ್ರವೇ ಅವುಗಳಿಗೆ ತಮ್ಮದೇ ಆದ ರೀತಿ ನೀತಿ ರಿವಾಜುಗಳಿವೆ ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳು ಸಹೋದರಿ ಭಾಷೆಗಳು ತಮಿಳು ಕನ್ನಡ ತೆಲುಗು ಮಲಯಾಳಿ ತುಳು ಪಂಚ ದ್ರಾವಿಡ ಭಾಷೆಗಳಾಗಿವೆ ಯಾವ ಭಾಷೆಯಿಂದ ಯಾವ ಭಾಷೆಯು ಹುಟ್ಟಿಲ್ಲ ತಮಿಳು ಸಂಗಮ ಕಾಲದಿಂದ ಬಂದ ದಕ್ಷಿಣ ಭಾರತದ ಮೊದಲ ಭಾಷೆಯಾಗಿದೆ ಇತಿಹಾಸದ ದೃಷ್ಟಿಯಿಂದ ಆದಿ ದ್ರಾವಿಡ ಭಾಷೆ ತದನಂತರ ಕನ್ನಡ ಬಂದಿದೆ ಆನಂತರ ತೆಲುಗು ಅನಂತರ ಮಲಯಾಳಿ ಕೊ ನೆಗೆ ತುಳು ಹೀಗೆ ಪಂಚ ದ್ರಾವಿಡ ಭಾಷೆಗಳಿಗೆ ತನ್ನದೇ ಆದ ಇತಿಹಾಸ ಶಿಸ್ತು ಇದೆ ಕಮಲ ಹಾಸನವರು ಸ್ವಂತ ತಿಳುವಳಿಕೆ ಇಲ್ಲದೆ ಇನ್ನೊಬ್ಬರಿಂದ ಕೇಳಿ ಓದಿ ಅಧ್ಯಯನದ ಬಲವಿಲ್ಲದೆ ಪಂಡಿತರ ಸಂಪರ್ಕವಿಲ್ಲದೆ ಒಂದೇ ಬಾರಿಗೆ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳುವುದು ಅಜ್ಞಾನದ ಪರಮಾವಧಿ ತಿಳುವಳಿಕೆ ಇಲ್ಲದೆ ಮಾತನಾಡಿದ ಕಮಲಹಾಸನವರು ಕನ್ನಡಿಗರಲ್ಲಿ ಕ್ಷಮೆ ಕೇಳಿದರೆ ಅವರು ಇನ್ನೂ ದೊಡ್ಡವರಾಗುತ್ತಾರೆ ತಪ್ಪು ಮಾತನಾಡಿ ತಪ್ಪು ತಿಳುವಳಿಕೆಯಿಂದ ಕೂಡಿ ಮತ್ತೆ ಹೈಕೋರ್ಟಿಗೆ ಹೋಗಿ ನನಗೆ ರಕ್ಷಣೆ ಕೊಡಿ ಎಂದು ಕೇಳುವುದು ಎಷ್ಟರಮಟ್ಟಿಗೆ ಸರಿ ಅಷ್ಟೇ ಅಲ್ಲ ತಪ್ಪು ವಾದ ಮಂಡಿಸುತ್ತಿರುವ ಕಮಲಹಾಸನವರಿಗೆ ಶೋಭೆ ಬರದು ಭಾಷಾ ವಿದ್ವಾಂಸರ ಒಂದು ಸಭೆಯನ್ನು ಕರೆಯಲಿ ಅದರಲ್ಲಿ ಚರ್ಚಿಸಿ ಸತ್ಯತೆ ವಿಷಯ ಕೊಳ್ಳಲಿ ಕೊನೆಗೆ ಕಮಲಹಾಸನವರಿಗೆ ಭಾಷಾ ಪರಿಜ್ಞಾನ ಬರಬಹುದು ಹಿಂದೆ ಒಮ್ಮೆ ಭಾಷಾ ಶಾಸ್ತ್ರಜ್ಞರಲ ಸೇರಿ ಸಭೆ ಮಾಡಿ ಒಂದು ನಿರ್ಣಯ ಕೈಕೊಂಡಿದ್ದಾರೆ ಭಾಷೆ ಎಲ್ಲಿ ಹುಟ್ಟಿದ್ದು ಹೇಗೆ ಹುಟ್ಟಿದ್ದು ಯಾವುದರಿಂದ ಯಾವ ಭಾಷೆ ಹುಟ್ಟಿದ್ದು ಈ ಎಲ್ಲ ವಿಷಯಗಳನ್ನು ಚರ್ಚಿಸಬಾರದೆಂದು ನಿರ್ಣಯ ತೆಗೆದುಕೊಂಡಿದೆ ಹೀಗಿರುವಾಗ ಇಂಥ ಚರ್ಚಾಸ್ಪದ ವಿಷಯಗಳನ್ನು ಭಾಷಾಜ್ಞಾನದ ಅರಿವಿಲ್ಲದೆ ಹೇಳಬಾರದು ಅವರಿಗೆ ತಮಿಳರ ತಮಿಳು ಭಾಷೆಯ ಮೇಲೆ ಅಭಿಮಾನವಿರಲಿ ಬೇಡವೆನ್ನುವುದಿಲ್ಲ ಆದರೆ ಕನ್ನಡಿಗರಿಗೆ ಅವಮಾನಿಸುವುದು ಸರಿಯಲ್ಲ ಒಂದು ಭಾಷೆ ಶ್ರೇಷ್ಠ ಇನ್ನೊಂದು ಭಾಷೆ ಕನಿಷ್ಠವೆಂದಾಗಲೇ ಇದರಿಂದ ಇದು ಹುಟ್ಟಿದೆ ಎಂದು ಹೇಳುವುದಾಗಲಿ ವಿನಾಕಾರಣ ವಾದ ವಿವಾದ ಚರ್ಚೆಗೆ ಅವಕಾಶ ಮಾಡಿಕೊಡಲು ಕೊಟ್ಟು ಭಾಷಾ ದ್ವೇಷ ಹುಟ್ಟಿಸುವುದು ತರತಮ ಭಾವ ಸೃಷ್ಟಿಸುವುದು ಗಲಭೆಗಳನ್ನು ಮಾಡಿಸುವುದು ಅಕ್ಷಮೆ ಅಪರಾಧವಾಗಿದೆ ಇದು ಭಾರತದ ಶ್ರೇಷ್ಠ ನಟನಿಗೆ ಗೌರವ ತರುವ ವಿಷಯವಲ್ಲ ಕಮಲಹಾಸನವರು ದಕ್ಷಿಣ ಭಾರತದ ಶ್ರೇಷ್ಠ ನಟರು ಎಲ್ಲಾ ಭಾಷೆಗಳ ಜನರು ಅವರನ್ನು ಗೌರವಿಸುತ್ತಾರೆ ಆ ಗೌರವ ಉಳಿಸಿಕೊಳ್ಳುವುದಕ್ಕಾದರೂ ಕ್ಷಮೆ ಕೇಳಬೇಕು ಉದ್ದ ಟತನದ ಮಾತು ಹೇಳಿದ್ದಕ್ಕೆ ಕನ್ನಡಿಗರ ಮನಸ್ಸಿಗೆ ನೋವಾದದ್ದಕ್ಕೆ ಕೂಡಲೆ ಕ್ಷಮೆ ಯಾಚಿಸಿದರೆ ಅವರು ಇನ್ನಷ್ಟು ಗೌರವಾನ್ವಿತ ವ್ಯಕ್ತಿಯಾಗುತ್ತಾರೆ ಕಮಲಹಾಸನವರು ತಮ್ಮ ಗೌರವ ಉಳಿಸಿಕೊಳ್ಳಲು ಮತ್ತು ಚಿತ್ರರಂಗದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಬಾಳಿ ಬದುಕಲು ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಅಭಿಮಾನಿಗಳು ಅವರನ್ನು ಮೆಚ್ಚಲು ಕೂಡಲೇ ಕ್ಷಮೆಯಾಚಿಸಿ ಕನ್ನಡಿಗರ ಮನಸ್ಸಿಗೆ ನೆಮ್ಮದಿಯನ್ನುಂಟುಮಾಡಲಿ ವಿನಾಕಾರಣ ರಾಧಾಂತ ಮಾಡಿ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಜೀವನದಲ್ಲಿ ಅವನತಿಯನ್ನು ಅನುಭವಿಸಬಹುದು ಅವರು ಇನ್ನೂ ಅನಾಹುತ ಹೇಳಿಕೆಗಳನ್ನು ಕೊಡಬಹುದು ಅದನ್ನು ತಡೆಯಲು ಮೂಗುದಾರ ಹಾಕಲು ಹೈಕೋರ್ಟ್ ಆದೇಶವನ್ನು ಪಾಲಿಸಿ ಕೂಡಲೇ ಕ್ಷಮೆಯಾಚಿಸಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಬೇಕೆಂದು ಶುಭ ಹಾರೈಸುತ್ತೇನೆ ತಪ್ಪು ಮಾಡುವುದು ಸಹಜ ತಪ್ಪನ್ನು ತಿದ್ದಿಕೊಳ್ಳುವುದು ಅದು ಬಹುದೊಡ್ಡ ಶಕ್ತಿಯಾಗಿದೆ ಮನುಷ್ಯ ತಪ್ಪು ಮಾಡುತ್ತಾನೆ ನಿಜ ತಿದ್ದಿಕೊಂಡು ನಡೆಯುವನು ಮಹಾತ್ಮನಾಗುತ್ತಾನೆ ತಪ್ಪು ಮಾಡಿಯೂ ಮಾಡಿಲ್ಲವೆಂದು ಸಮರ್ಥಿಸುವವನು ಜನರ ಕಣ್ಣಲ್ಲಿ ಅಪರಾಧಿಯಾಗುತ್ತಾನೆ ಹಾಗೆ ಕಮಲಹಾಸನವರು ಆ ಸ್ಥಾನವನ್ನು ಅಲಂಕರಿಸಬಾರದೆಂದು ನನ್ನ ಬಯಕೆಯಾಗಿದೆ.
ಪ್ರೊಫೆಸರ್. ಶಿವರಾಜ್ ಪಾಟೀಲ್ ಚಿಂತಕರು ಹಾಗೂ ಸಾಹಿತಿಗಳು ಕಲಬುರಗಿ