ಯುಪಿಎಸ್ಸಿ ಯಶಸ್ವಿ ಮೋಹನ್ ಪಾಟೀಲರಿಗೆ ಅಭಿನಂದನಾ ಕಾರ್ಯಕ್ರಮ

ಯುಪಿಎಸ್ಸಿ ಯಶಸ್ವಿ ಮೋಹನ್ ಪಾಟೀಲರಿಗೆ ಅಭಿನಂದನಾ ಕಾರ್ಯಕ್ರಮ

ಯುಪಿಎಸ್ಸಿ ಯಶಸ್ವಿ ಮೋಹನ್ ಪಾಟೀಲರಿಗೆ ಅಭಿನಂದನಾ ಕಾರ್ಯಕ್ರಮ

ಕಲಬುರ್ಗಿ : ಜಿಲ್ಲೆಯ ಕಮಲಾಪುರ ತಾಲೂಕಿನ ಡೋರ್ ಜಂಬಗಾ ಗ್ರಾಮದ ಕೃಷಿ ಕುಟುಂಬದ ಸಂಗನಗೌಡ ಪಾಟೀಲ ಅವರ ಪುತ್ರ ಮೋಹನ್ ಎಸ್. ಪಾಟೀಲ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 984ನೇ ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ, ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ಮತ್ತು ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ನಗರದ ಸಪ್ತಗಿರಿ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಸಕ ಎಂ.ವೈ. ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಶರಣಕುಮಾರ್ ಮೋದಿ, ಚಪ್ಪರಬಂದಿ ಪ್ರಭಾಕರ್ ಫೌಂಡೇಶನ್ ಮುಖ್ಯಸ್ಥ ಶರಣರಾಜ ಚಪ್ಪರಬಂದಿ, ನಾಲ್ಕು ಚಕ್ರ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ ಮೊದಲಾದವರು ಪಾಲ್ಗೊಂಡು ಮೋಹನ್ ಎಸ್. ಪಾಟೀಲ ಅವರನ್ನು ಗೌರವಿಸಿದರು.

ಶರಣರಾಜ ಚಪ್ಪರಬಂದಿ ಸ್ವಾಗತಿಸಿ, ಮಾಲಾ ಕಣ್ಣಿ, ವಿಶ್ವನಾಥ್ ಪಾಟೀಲ ಗವನಳ್ಳಿ, ಬಾಬುರಾವ್ ಶೆರಿಕಾರ ಮೊದಲಾದವರು ಮಾತನಾಡಿ ಮೋಹನ್ ಪಾಟೀಲ ಅವರ ಶ್ರಮ ಹಾಗೂ ಸಾಧನೆಯನ್ನು ಪ್ರಶಂಸಿಸಿದರು. 

ಕಾರ್ಯಕ್ರಮದಲ್ಲಿ ಮೋಹನ್ ಪಾಟೀಲರ ತಂದೆ ಸಂಗನಗೌಡ ಪಾಟೀಲ, ಸಮಾಜದ ಹಿರಿಯ ಮುಖಂಡರು ರಾಜುಗೌಡ ನಾಗನಹಳ್ಳಿ, ಗಿರಿರಾಜ ಯಳಿಮೇಲಿ, ವಿಶ್ವನಾಥ್ ಪಾಟೀಲ ಗವನಳ್ಳಿ, ಮಲ್ಕಪಗೌಡ ವಕೀಲರು, ಕಲ್ಯಾಣಿ ಕಣ್ಣು, ಶ್ರೀಧರ್ ನಾಗನಹಳ್ಳಿ, ಮಲ್ಲಿಕಾರ್ಜುನ ಡೋಣೂರ, ವೀರೇಶ್ ಬಿರಾದಾರ್, ಉದಯ್ ಕುಮಾರ್ ಜೇವರ್ಗಿ, ರೇವಣಸಿದ್ದ ಪಟ್ಟಣ, ಕಲ್ಯಾಣರಾವ ಅಂಬಲಗಿ, ನಾಗೇಶ್ ಬೆಳಮಗಿ, ಹನುಮಂತರಾಯ ಅಟ್ಟೂರ, ಹನುಮಂತರ ಪಾಟೀಲ, ಸಂತೋಷ್ ಪಾಟೀಲ ಸರಡಗಿ, ಶಿವಯೋಗಿ ಬಿರಾದಾರ್, ದಾನೇಶ್ ಕಣ್ಣೂರ್, ಸಂತೋಷ್ ಬೆನಕನಹಳ್ಳಿ, ಕರ್ಬಸಪ್ಪ ಮುಲ್ಗೆ, ಮಲ್ಲಿನಾಥ್ ನಾಗನಹಳ್ಳಿ, ಕಲ್ಯಾಣ್ ಪಾಟೀಲ ಕಣ್ಣಿ, ಮಹೇಶ್ ಕಣ್ಣಿ, ಕಿರಣ್ ಕಣ್ಣಿ, ಶ್ರೀಶೈಲ ಮುಲ್ಗೆ, ರವಿ ರೇವೂರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶರಣರಾಜ ಚಪ್ಪರಬಂದಿ ಸ್ವಾಗತ ಭಾಷಣ ನೀಡಿದರು. ಪ್ರಭುಲಿಂಗ ಮೂಲಗೆ ನಿರೂಪಣೆ ನಿರ್ವಹಿಸಿದರು ಮತ್ತು ವಂದನಾರ್ಪಣೆಯನ್ನು ಮಲ್ಕಪಗೌಡ ವಕೀಲರು ನಡೆಸಿಕೊಟ್ಟರು.