ಸಾರ್ವಜನಿಕರು ಕಸ ಎಸೆಯುವಲ್ಲಿ ಜವಾಬ್ದಾರಿ ತೋರಬೇಕು: ರಾಜೇಶ್ವರಿ ಸಾಹು

ಸಾರ್ವಜನಿಕರು ಕಸ ಎಸೆಯುವಲ್ಲಿ ಜವಾಬ್ದಾರಿ ತೋರಬೇಕು: ರಾಜೇಶ್ವರಿ ಸಾಹು

ಸಾರ್ವಜನಿಕರು ಕಸ ಎಸೆಯುವಲ್ಲಿ ಜವಾಬ್ದಾರಿ ತೋರಬೇಕು: ರಾಜೇಶ್ವರಿ ಸಾಹು

ಕಲಬುರಗಿ:ತಾಲೂಕಿನ ಹಾಗರಗಾ ಗ್ರಾಮ ಪಂಚಾಯಿತಿಯ ಆಜಾದಪೂರ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯ ಸ್ಥಳದಲ್ಲಿ ಸಾಹಸ ಸಂಸ್ಥೆಯ ಸಹಯೋಗದೊಂದಿಗೆ ಸ್ವಚ್ಛ ಭಾರತ ಮಿಷನ್ ಯೋಜನೆಯ ಕುರಿತು ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಂ.ಅಧ್ಯಕ್ಷೆ ರಾಜೇಶ್ವರಿ ಸಾಹು ಅವರು, “ಸಾರ್ವಜನಿಕರು ಕಸವನ್ನು ಎಲ್ಲಿ ಬೇಕೆಂದಲ್ಲಿ ಎಸೆದರೆ ಪರಿಸರ ಮಾಲಿನ್ಯ ಉಂಟಾಗುತ್ತದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು. ಕಸದಿಂದ ರಸ ತಯಾರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಹಾಗರಗಾ ಗ್ರಾಮ ಪಂಚಾಯತಿ ನಿರಂತರ ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು.

ಅವರು ಮುಂದಾಗಿ, “ಗ್ರಾಮಗಳನ್ನು ಸ್ವಚ್ಛವಾಗಿಡಲು ಎಲ್ಲರೂ ಶೌಚಾಲಯಗಳ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು ಮತ್ತು ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಬೇಕು” ಎಂಬುದಾಗಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಂ ಉಪಾಧ್ಯಕ್ಷೆ ಮೀನಾಕ್ಷಿ ಸೂರ್ಯಕಾಂತ ನಾಕಮನ್, ಟಿಇಎ ಹೀನಾ, ಐಇಸಿ ದೇವರಾಜ್ ಸೇರಿದಂತೆ ಪಂ ಸಿಬ್ಬಂದಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು ಉಪಸ್ಥಿತರಿದ್ದರು.