ಡಾ. ಅಂಬೇಡ್ಕರ್ ಜಯಂತೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಡಾ. ಅಂಬೇಡ್ಕರ್ ಜಯಂತೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಡಾ. ಅಂಬೇಡ್ಕರ್ ಜಯಂತೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತೋತ್ಸವದ ಪ್ರಯುಕ್ತ, ಗ್ರಾಮದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸಮಿತಿಯ ಅಧ್ಯಕ್ಷರಾಗಿ ಶಶಿಕಾಂತ ಹೋಳ್ಕರ ಅವರು ಆಯ್ಕೆಯಾಗಿದ್ದು, ಅಸ್ಲಾಂ ಮೂಲಗೆ, ಸುರೇಶ ಧಾಡಿ, ಮತ್ತು ಮಹೇಂದ್ರಕುಮಾರ ಕಾಂಬಳೆ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ವಿಜಯಕುಮಾರ ಬುಳ್ಕರ್ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಹಣಮಂತ ಕೋಟೆ, ಕಾರ್ಯದರ್ಶಿಯಾಗಿ ಮಂಜುನಾಥ ಆರ್.ಮಾವಿನ, ಸಹ ಕಾರ್ಯದರ್ಶಿಯಾಗಿ ಜಟ್ಟೆಪ್ಪ ಧನ್ನಿ, ಹಾಗೂ ಖಜಾಂಚಿಯಾಗಿ ಅರುಣಕುಮಾರ ಹದಗಲ್ ಅವರು ಆಯ್ಕೆಯಾದರು.

ಕಪಿಲ ಧನ್ನಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ, ಅಂಬರೀಶ ಅಟ್ಟೂರ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ, ಲಾಲಶೇಖರ ಮದನ ಮತ್ತು ಶ್ರೀನಿವಾಸ ಚುಬ್ಬನ್ ಕ್ರೀಡಾ ಕಾರ್ಯದರ್ಶಿಗಳಾಗಿ, ರಾವಬಹದ್ದೂರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮತ್ತು ಮಲ್ಲಿಕಾರ್ಜುನ ಮದನ ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಬಸವರಾಜ ಪಿತಾಂಬರ ಅವರನ್ನು ಸಮಿತಿಯ ನಿರ್ದೇಶಕರಾಗಿ, ವಿಕಾಸ ರಾಮನ ಅವರನ್ನು ಸಹ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.

ಈ ಆಯ್ಕೆ ಸಂಬಂಧಿತ ಮಾಹಿತಿ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಶಿವಶರಣಪ್ಪಾ ಸಿ.ಸಜ್ಜನ ಅವರು, ಸಮಿತಿಯ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದ್ದಾರೆ.