ಮಹಿಳೆಯರ ಜೀವನ ಶ್ರೇಷ್ಠವಾದದ್ದು :..ಬಿ.ಕೆ ಜಯಶ್ರೀ.

ಮಹಿಳೆಯರ ಜೀವನ ಶ್ರೇಷ್ಠವಾದದ್ದು :..ಬಿ.ಕೆ ಜಯಶ್ರೀ.

|ಬಿಜೆಪಿ ಕಛೇರಿಯಲ್ಲಿ ಮಹಿಳಾ ದಿನಾಚರಣೆ|

ಮಹಿಳೆಯರ ಜೀವನ ಶ್ರೇಷ್ಠವಾದದ್ದು :..ಬಿ.ಕೆ ಜಯಶ್ರೀ. 

ಶಹಾಬಾದ : - ಮಹಿಳಾ ದಿನಾಚರಣೆ ಕೇವಲ ಒಂದು ದಿನ ಆಚರಣೆ ಮಾಡುವುದಲ್ಲಾ, ದಿನನಿತ್ಯ ನೆನೆಯುವ ದಿನವಾಗಿದೆ, ಮಹಿಳೆ ಪುರುಷರಿಗಿಂತ ಕಡಿಮೆ ಅಲ್ಲ, ಪುರುಷರಿಗೆ ಸರಿಸಮಾನವಾಗಿ ಬೆಳೆದು ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ, ಸ್ತ್ರೀ ಅನೇಕ ಶಕ್ತಿಯನ್ನು ಹೊಂದಿದ್ದಾಳೆ ಎಂದು ಶಹಾಬಾದನ ಬ್ರಹ್ಮಾಕುಮಾರಿ ಆಶ್ರಮದ ಬ್ರಹ್ಮಾಕುಮಾರಿ ಜಯಶ್ರೀ ಹೇಳಿದರು.

ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಹಿಳಾ ಮೋರ್ಚ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿನ ಮೇಲೆ ತಾಯಿ ಯೋಚನೆ ಮಾಡುವುದು ಮತ್ತು ಪ್ರತಿಯೊಂದು ಚಿಂತನೆಗಳ ಪ್ರಭಾವ ಮಗುವಿನ ಮೇಲೆ ಬೀಳುತ್ತದೆ. ತಾಯಿಯ ಸಂಸ್ಕಾರವು ಮಗು ಜನ್ಮ ತಾಳುವದರ ಜೊತೆಗೆ ಬರುತ್ತದೆ, ನಮ್ಮ ಜೀವನ ಕೇವಲ ಸಿನಿಮಾ ಅಲ್ಲ ನಮ್ಮ ಜೀವನ ಶ್ರೇಷ್ಠವಾದದ್ದು ಎಂದರು. 

ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಅಶ್ವಿನಿ ಮಾತನಾಡಿ, ಹೆಣ್ಣು ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗದೆ ಧೈರ್ಯದಿಂದ ಬದುಕಬೇಕು, ಪ್ರಪಂಚದಲ್ಲಿ ಹೆಣ್ಣಿಗೆ ಶ್ರೇಷ್ಠವಾದ ಸ್ಥಾನ ಇದೆ ಎಂದು ಅಭಿಪ್ರಾಯ ಪಟ್ಟರು.

ಪೋಲಿಸ ಇಲಾಖೆಯ ಮಹಾನಂದ ಬಿಜೆಪಿ ಯ ಜ್ಯೋತಿ ಶರ್ಮ, ಪದ್ಮ ಕಟ್ಟಿಗೆ ಹಾಗೂ ನಂದಾ ಗುಡೂರ ವೇದಿಕೆ ಮೇಲೆ ಇದ್ದರು. 

ಸಿದ್ರಾಮ ಕುಸಾಳೆ ಪ್ರಸ್ತಾವಿಕವಾಗಿ ಮಾತನಾಡಿದರು. 

ಶಶಿಕಲಾ ಸಜ್ಜನ್, ಸನ್ನಿಧಿ ಕುಲಕರ್ಣಿ, ನೀಲಗಂಗಮ್ಮ ಗಂಟ್ಲಿ, ಜಯಶ್ರೀ ಸೂಡಿ ಹಾಗೂ ಮಹಿಳಾ ಮೋರ್ಚದ ಪದಾಧಿಕಾರಿಗಳು ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.