ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಪರಿಗಣಿಸಿ : ಜಿ. ಪಂ. ಮಾಜಿ ಅಧ್ಯಕ್ಷ ದೀಪನಾಗ ಪುಣ್ಯಶೆಟ್ಟಿ ಮನವಿ

ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಪರಿಗಣಿಸಿ : ಜಿ. ಪಂ. ಮಾಜಿ ಅಧ್ಯಕ್ಷ ದೀಪನಾಗ ಪುಣ್ಯಶೆಟ್ಟಿ ಮನವಿ

ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಪರಿಗಣಿಸಿ : ಜಿ. ಪಂ. ಮಾಜಿ ಅಧ್ಯಕ್ಷ ದೀಪನಾಗ ಪುಣ್ಯಶೆಟ್ಟಿ ಮನವಿ 

ಚಿಂಚೋಳಿ : ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದೀಪನಾಗ ಪುಣ್ಯಶೆಟ್ಟಿ ಅವರನ್ನು ಕಲಬುರಗಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪರಿಗಣಿಸುವಂತೆ ಕೋರಿ ಅವರ ಅಭಿಮಾನಿ, ಬೆಂಬಲಿಗರೊಂದಿಗೆ ಕಲಬುರಗಿ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮಕ್ಕೆ ಎಐಸಿಸಿ ಉಸ್ತುವಾರಿಗಳಾಗಿ ಆಗಮಿಸಿದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಾಸಕ ವಿಶ್ವಜಿತ್ ಕದಂ ಅವರಿಗೆ ಮನವಿ ಸಲ್ಲಿಸಿ ಕೋರಿದ್ದಾರೆ.

ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಂತೆ ಕಳೆದ 20 ವರ್ಷಗಳಿಂದ ಪಕ್ಷದ ಸೇವೆ ಮತ್ತು ಸಂಘಟನೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. 21ನೇ ವಯಸ್ಸಿನಲ್ಲೇ ಜಿಲ್ಲಾ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿ ಮತ್ತು ಯುವ ಕಾಂಗ್ರೆಸ್ ನ ಅಧ್ಯಕ್ಷನಾಗಿ ಸೇವೆ ಮಾಡಿರುವ ಅನುಭವ ಹೊಂದಿದ್ದೇನೆ. ಲೋಕಸಭೆ , ವಿಧಾನಸಭೆ, ವಿಧಾನ ಪರಿಷತ್ ಮತ್ತು ತಾಲೂಕ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ ಜವಾಬ್ದಾರಿಯುತ ಕೆಲಸ ಮಾಡಲಾಗಿದೆ. ಆದರೆ ಕಳೆದ 15 ವರ್ಷಗಳಿಂದ ಯಾವುದೇ ಸಂಘಟನಾತ್ಮಕ ಹಾಗೂ ರಾಜಕೀಯ ಹುದ್ದೆಗಳು ಗುರುತಿಸಿ ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಸ್ಥಾನದ ಹುದ್ದೆಗೆ ಬಲವಾಗಿ ಪರಿಗಣಿಸಿ ಹುದ್ದೆಗೆ ನೇಮಿಸಬೇಕೆಂದು ಉಸ್ತುವಾರಿ ವಿಶ್ವಜಿತ್ ಕದಂ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಆನಂದರೆಡ್ಡಿ ಪಟಪಳ್ಳಿ, ವೀರಶೈಟ್ಟಿ ಪಾಟೀಲ್ ನಾಗಇದ್ಲಾಯಿ, ಮಹಿಪಾಲ್ ರೆಡ್ಡಿ, ಅಲಾವುದ್ದಿನ್ ಅನ್ಸಾರಿ ಸೇರದಂತೆ ಬೆಂಬಲಿಗರು, ಅಭಿಮಾನಿಗಳು ಇದ್ದರು.