ಕಲಬುರಗಿಯ ರೈಲ್ವೆ ಬೇಡಿಕೆಗಳ ಕುರಿತು ಕೇಂದ್ರ ರಾಜ್ಯ ರೈಲ್ವೆ ಸಚಿವ ಸೋಮಣ್ಣನವರಿಗೆ ಮನವಿ

ಕಲಬುರಗಿಯ ರೈಲ್ವೆ ಬೇಡಿಕೆಗಳ ಕುರಿತು ಕೇಂದ್ರ ರಾಜ್ಯ ರೈಲ್ವೆ ಸಚಿವ ಸೋಮಣ್ಣನವರಿಗೆ ಮನವಿ
ಕಲಬುರಗಿ:ಕಲ್ಯಾಣ ನಾಡು ವಿಕಾಸ ವೇದಿಕೆಯು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸೋಮಣ್ಣನವರನ್ನು ಕಲಬುರಗಿಯಲ್ಲಿ ಭೇಟಿಯಾಗಿ, ಕಲ್ಯಾಣ ಕರ್ನಾಟಕ ಭಾಗದ ಹಾಗೂ ಕಲಬುರಗಿಯ ಪ್ರಮುಖ ರೈಲ್ವೆ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿತು.
ಈ ಸಂದರ್ಭ ವೇದಿಕೆಯ ಪ್ರತಿನಿಧಿಗಳು, ಕಲ್ಯಾಣ ಕರ್ನಾಟಕವು ಇತಿಹಾಸದಿಂದಲೂ ಹಿಂದುಳಿದ ಪ್ರದೇಶವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಗಮನಕ್ಕೆ ಪಾತ್ರವಾಗಬೇಕೆಂದು ಒತ್ತಾಯಿಸಿದರು. ಹೀಗಾಗಿ, 40 ವರ್ಷಗಳಿಂದ ಬಾಕಿ ಉಳಿದಿರುವ *ಕಲಬುರಗಿ ರೈಲ್ವೆ ವಿಭಾಗವನ್ನು ತಕ್ಷಣ ಆರಂಭಿಸಲು* ಆಗ್ರಹಿಸಿದರು.
ಮುಖ್ಯ ಬೇಡಿಕೆಗಳು:
* ಕಲಬುರಗಿ/ತಾಜಸುಲ್ತಾನಪೂರ/ಗಾಣಗಾಪೂರ ನಿಲ್ದಾಣಗಳನ್ನು ಸಿಕಂದ್ರಾಬಾದ್ ರೈಲ್ವೆ ವಲಯಕ್ಕೆ ಸೇರಿಸಬೇಕು.
* ಕಲಬುರಗಿ–ಲಾತೂರು ನಡುವಿನ ಹೊಸ ರೈಲು ಮಾರ್ಗಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಬೇಕು.
* ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ 2ನೇ ಫಿಟ್ಲೈನ್ ಕಾಮಗಾರಿ ಆರಂಭಿಸಬೇಕು.
* ಕಲಬುರಗಿಯಿಂದ ಬೆಂಗಳೂರು/ಮೈಸೂರಿಗೆ ನೇರ ಮೀಸಲು ರೈಲು ಆರಂಭಿಸಲು ಕ್ರಮವಹಿಸಬೇಕು.
* ಅಮೃತ ಭಾರತ ಯೋಜನೆಯಡಿ ಕಲಬುರಗಿ, ವಾಡಿ, ಶಹಾಬಾದ, ಗಾಣಗಾಪೂರ ನಿಲ್ದಾಣಗಳ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು.
* ಕಲಬುರಗಿ–ಹೈದ್ರಾಬಾದ್ ಎಕ್ಸ್ಪ್ರೆಸ್ (11307/08) ಮತ್ತು ಸೊಲ್ಲಾಪುರ–ಗುಂತಕಲ ಪ್ಯಾಸೆಂಜರ್ (71301/02) ರೈಲುಗಳನ್ನು ಪುನಃ ಆರಂಭಿಸಬೇಕು.
* ಫಲಕನಾಮ–ವಾಡಿ ಎಕ್ಸ್ಪ್ರೆಸ್ (57669/70) ಹಾಗೂ ಸಿಕಂದ್ರಾಬಾದ್–ಚಿತ್ತಾಪುರ ಮೆಮು (67759/60) ರೈಲುಗಳನ್ನು ಕಲಬುರಗಿವರೆಗೆ ವಿಸ್ತರಿಸಬೇಕು.
ಅಂತಿಮವಾಗಿ, ಕಲ್ಯಾಣ ಕರ್ನಾಟಕ ಭಾಗದ ಜನತೆಯ ಬಹುಕಾಲದ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಇಡೇರಿಸಿ, ಸಂಚಾರಿ ಮೂಲಸೌಕರ್ಯದಲ್ಲಿ ಪ್ರಗತಿ ಸಾಧಿಸುವಂತೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದವರು:
ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಮುಖಂಡರಾದ ಜೈಭೀಮ ಮಾಳಗೆ, ಪ್ರವೀಣ ಖೇಮನ್, ದತ್ತು ಜಮಾದಾರ, ಮಲ್ಲು ಸಂಕನ, ರಾಣೀಶ ಸಾವಳಗಿ, ಮಲ್ಲು ದೋರೆ ಹಾಗೂ ಇತರರು ಉಪಸ್ಥಿತರಿದ್ದರು