ಕಲಬುರಗಿಯ ರೈಲ್ವೆ ಬೇಡಿಕೆಗಳ ಕುರಿತು ಕೇಂದ್ರ ರಾಜ್ಯ ರೈಲ್ವೆ ಸಚಿವ ಸೋಮಣ್ಣನವರಿಗೆ ಮನವಿ

ಕಲಬುರಗಿಯ ರೈಲ್ವೆ ಬೇಡಿಕೆಗಳ ಕುರಿತು ಕೇಂದ್ರ ರಾಜ್ಯ ರೈಲ್ವೆ ಸಚಿವ ಸೋಮಣ್ಣನವರಿಗೆ ಮನವಿ

ಕಲಬುರಗಿಯ ರೈಲ್ವೆ ಬೇಡಿಕೆಗಳ ಕುರಿತು ಕೇಂದ್ರ ರಾಜ್ಯ ರೈಲ್ವೆ ಸಚಿವ ಸೋಮಣ್ಣನವರಿಗೆ ಮನವಿ

ಕಲಬುರಗಿ:ಕಲ್ಯಾಣ ನಾಡು ವಿಕಾಸ ವೇದಿಕೆಯು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸೋಮಣ್ಣನವರನ್ನು ಕಲಬುರಗಿಯಲ್ಲಿ ಭೇಟಿಯಾಗಿ, ಕಲ್ಯಾಣ ಕರ್ನಾಟಕ ಭಾಗದ ಹಾಗೂ ಕಲಬುರಗಿಯ ಪ್ರಮುಖ ರೈಲ್ವೆ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿತು.

ಈ ಸಂದರ್ಭ ವೇದಿಕೆಯ ಪ್ರತಿನಿಧಿಗಳು, ಕಲ್ಯಾಣ ಕರ್ನಾಟಕವು ಇತಿಹಾಸದಿಂದಲೂ ಹಿಂದುಳಿದ ಪ್ರದೇಶವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಗಮನಕ್ಕೆ ಪಾತ್ರವಾಗಬೇಕೆಂದು ಒತ್ತಾಯಿಸಿದರು. ಹೀಗಾಗಿ, 40 ವರ್ಷಗಳಿಂದ ಬಾಕಿ ಉಳಿದಿರುವ *ಕಲಬುರಗಿ ರೈಲ್ವೆ ವಿಭಾಗವನ್ನು ತಕ್ಷಣ ಆರಂಭಿಸಲು* ಆಗ್ರಹಿಸಿದರು.

ಮುಖ್ಯ ಬೇಡಿಕೆಗಳು:

* ಕಲಬುರಗಿ/ತಾಜಸುಲ್ತಾನಪೂರ/ಗಾಣಗಾಪೂರ ನಿಲ್ದಾಣಗಳನ್ನು ಸಿಕಂದ್ರಾಬಾದ್ ರೈಲ್ವೆ ವಲಯಕ್ಕೆ ಸೇರಿಸಬೇಕು.

* ಕಲಬುರಗಿ–ಲಾತೂರು ನಡುವಿನ ಹೊಸ ರೈಲು ಮಾರ್ಗಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಬೇಕು.

* ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ 2ನೇ ಫಿಟ್ಲೈನ್ ಕಾಮಗಾರಿ ಆರಂಭಿಸಬೇಕು.

* ಕಲಬುರಗಿಯಿಂದ ಬೆಂಗಳೂರು/ಮೈಸೂರಿಗೆ ನೇರ ಮೀಸಲು ರೈಲು ಆರಂಭಿಸಲು ಕ್ರಮವಹಿಸಬೇಕು.

* ಅಮೃತ ಭಾರತ ಯೋಜನೆಯಡಿ ಕಲಬುರಗಿ, ವಾಡಿ, ಶಹಾಬಾದ, ಗಾಣಗಾಪೂರ ನಿಲ್ದಾಣಗಳ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು.

* ಕಲಬುರಗಿ–ಹೈದ್ರಾಬಾದ್ ಎಕ್ಸ್‌ಪ್ರೆಸ್ (11307/08) ಮತ್ತು ಸೊಲ್ಲಾಪುರ–ಗುಂತಕಲ ಪ್ಯಾಸೆಂಜರ್ (71301/02) ರೈಲುಗಳನ್ನು ಪುನಃ ಆರಂಭಿಸಬೇಕು.

* ಫಲಕನಾಮ–ವಾಡಿ ಎಕ್ಸ್‌ಪ್ರೆಸ್ (57669/70) ಹಾಗೂ ಸಿಕಂದ್ರಾಬಾದ್–ಚಿತ್ತಾಪುರ ಮೆಮು (67759/60) ರೈಲುಗಳನ್ನು ಕಲಬುರಗಿವರೆಗೆ ವಿಸ್ತರಿಸಬೇಕು.

ಅಂತಿಮವಾಗಿ, ಕಲ್ಯಾಣ ಕರ್ನಾಟಕ ಭಾಗದ ಜನತೆಯ ಬಹುಕಾಲದ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಇಡೇರಿಸಿ, ಸಂಚಾರಿ ಮೂಲಸೌಕರ್ಯದಲ್ಲಿ ಪ್ರಗತಿ ಸಾಧಿಸುವಂತೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದವರು:

ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಮುಖಂಡರಾದ ಜೈಭೀಮ ಮಾಳಗೆ, ಪ್ರವೀಣ ಖೇಮನ್, ದತ್ತು ಜಮಾದಾರ, ಮಲ್ಲು ಸಂಕನ, ರಾಣೀಶ ಸಾವಳಗಿ, ಮಲ್ಲು ದೋರೆ ಹಾಗೂ ಇತರರು ಉಪಸ್ಥಿತರಿದ್ದರು