ಪ್ರೋ.ಎ.ಎಚ್.ರಾಜಾಸಾಬ್ ಅವರಿಗೆ ಅಭಿನಂದನಾ ಸಮಾರಂಭ

ಪ್ರೋ.ಎ.ಎಚ್.ರಾಜಾಸಾಬ್ ಅವರಿಗೆ ಅಭಿನಂದನಾ ಸಮಾರಂಭ
ಕಲಬುರಗಿ: ನಗರದ ಶ್ರೀ ವಿದ್ಯಾ ಪದವಿ ಪೂರ್ವ, ಪದವಿ ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೋ.ಎ.ಎಚ್.ರಾಜಾಸಾಬ್ ಅವರಿಗೆ ಅಭಿನಂದನಾ ಸಮಾರಂಭ ಜರುಗಿರು.
ವಿಜ್ಞಾನದ ಪ್ರಗತಿಯ ರಾಷ್ಟ್ರದ ಪ್ರಗತಿ ಒಂದು ರಾಷ್ಟ್ರದ ಅಭಿವೃದ್ಧಿ ವಿಜ್ಞಾನ ಕ್ಷೇತ್ರವನ್ನು ಅವಲಂಬಿಸಿದೆ ವಿಜ್ಞಾನದ ಪ್ರಗತಿಯ ರಾಷ್ಟ್ರದ ಪ್ರಗತಿ ಎಂದು ಅಭಿನಂದನೆಯನ್ನು ಸ್ವೀಕರಿಸಿ ಪ್ರೊ. ಎ.ಹೆಚ್ ರಾಜಸಾಬ್ ಮಾತನಾಡಿದರು.
ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದರ ಜೊತೆಗೆ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ
ಸಾಕಷ್ಟು ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರು ಸಹ ಅಲ್ಲಲ್ಲಿ ಮೌಡ್ಯ ಕಂದಾಚಾರ ಪ್ರಕರಣಗಳು ಇನ್ನು ಜೀವಂತವಾಗಿರುವುದು ದುರಾದೃಷ್ಟಕರ ಎಂದು ಅಭಿಪ್ರಾಯಪಟ್ಟರು. ರಾಜ್ಯದ ಜನರಲ್ಲಿ ವಿಜ್ಞಾನವನ್ನು ಪ್ರಚಾರ ಮಾಡಿ ವೈಜ್ಞಾನಿಕ ಬೆಳವಣಿಗೆಗೆ ಉತ್ತೇಜನ ನೀಡುವುದು ತುಂಬಾ ಅಗತ್ಯವಿದೆ ಎಂದರು.
ಗಿರೀಶ್ ಕಡ್ಲೆವಾಡ ಮಾತನಾಡಿಮಣ್ಣು ನೀರು ಗಾಳಿ ಕಲುಷಿತಕೊಂಡಿದೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಲ್ಲರೂ ಸೇರಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ವೇದಿಕೆ ಮೇಲೆ ಡಾ. ನರೇಂದ್ರ ಬಡಶೇಶಿ, ಡಾ. ಕವಿರಾಜ್ ಪಾಟೀಲ್ ಇದ್ದರು. ಕಾರ್ಯಕ್ರಮದಲ್ಲಿ ಡಾ. ಪ್ರಭಾ ಎಸ್ಎನ್, ಡಾ.ಗತಪ್ನಡಗಿ, ಸಂಗಮೇಶ್ ಹಿರೇಮಠ್,
ಡಾ.ಸರಸ್ವತಿ, ಡಾ. ಲತಾ ಕರೆಕಲ್, ಡಾ. ಜಗನ್ನಾಥ್ ಡೆಂಗಿ, ಅಸ್ರ ಯಾಸ್ಮಿನ್, ಮಹೇಶ್ ದೆವಣಿ ಸೇರಿದಂತೆ ಮುಂತಾದ ಪ್ರಮುಖರು ಭಾಗವಹಿಸಿದ್ದರು. ಡಾ. ರಾಜು ಮೋದಿ ಸ್ವಾಗತಿಸಿದರು. ಮಾಣಿಕರಾವ ಸಕ್ಪಲ್ ನಿರ್ವಹಿಸಿದರು.